ಸೆನ್ಸಾರ್ ಸುಳಿಯಲ್ಲಿ ನಮಸ್ತೆ ಇಂಡಿಯಾ
Posted date: 19 Mon, May 2014 – 09:59:36 PM

ಕರ್ಣಶ್ರೀ ಎಂಟರ್ ಪ್ರೈಸಸ್ ಲಾಂಛನದಲ್ಲಿ ಶ್ರೀಮತಿ. ಕೆ. ಮಾಲಿನಿ. ಡಿ.ಆರ್. ಶಿವಕುಮಾರ ಗೌಡ ಅರ್ಪಿಸುವ ನಮಸ್ತೆ ಇಂಡಿಯಾ ಮಕ್ಕಳ ಚಿತ್ರವನ್ನು ಕಳೆದ ವಾರ ಸೆನ್ಸಾರ್ ಮಂಡಳಿಯು ವೀಕ್ಷಿಸಿದ್ದು ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಶಿಫಾರಸ್ಸು ಮಾಡಿರುತ್ತಾರೆ,.  ಚಿತ್ರದಲ್ಲಿ ಯಾವುದೇ ಅಶ್ಲೀಲ ಸಂಭಾಷಣೆ, ರಕ್ತ, ತೋರಿಸಿರುವುದಿಲ್ಲ.  ಚಿತ್ರದಲ್ಲಿ ಹಂಪೆಯ ವೈಭವದ ಇತಿಹಾಸವನ್ನು ಹೇಳುವ ಮೂಲಕ ಮಕ್ಕಳಲ್ಲಿ ಕರಾಟೆಯ ವಿಷಯದಿಂದ ಆತ್ಮಸ್ಥೈರ್ಯ ತುಂಬುವ ತಿರುಳನ್ನು ಚಿತ್ರ ಒಳಗೊಂಡಿದೆ ಹಾಗೂ ದೇಶ ಪ್ರೇಮದ ವಿಷಯವನ್ನು ಸಹ ಒಳಗೊಂಡಿರುತ್ತೆ. ಇಷ್ಟಾದರೂ ಸೆನ್ಸಾರ್ ಮಂಡಳಿಯು ಸರ್ಟಿಫಿಕೆಟ್ ನೀಡಲು ನಿರಾಕರಿಸಿದ್ದು ತಾಂತ್ರಿಕ ಕಾರಣಗಳಿಂದ ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಶಿಫಾರಸ್ಸು ಮಾಡಿದ್ದಾರೆ. ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ-ಗುಣವಂತ ಮಂಜು, ಛಾಯಾಗ್ರಹಣ - ನಂದಕುಮಾರ್, ಸಂಗೀತ- ಇಂದ್ರಸೇನ, ಸಾಹಸ - ರಾಮ್‌ದೇವ್,  ತಾರಾಗಣದಲ್ಲಿ  ಧನುಷ್, ಮೈತ್ರೇಯ, ತನುಷಾ, ನೆ.ಲ. ನರೇಂದ್ರಬಾಬು, ಪ್ರೇಮಲತ,  ಶುಭರಕ್ಷ, ರಾಜ್‌ಕಮಲ್, ಅಬ್ದುಲ್, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed